Friday, 9 February 2018


       ಗಝಲ್--೨
ವಸಂತನಂತೆ ಹಸಿರಿತ್ತ ಹರೆಯವ ಮತ್ತೆ ಹೊಂದಲು ಬಯಸುವೆ.
ನವೋಲ್ಲಾಸದ ಸವಿಗಾಲವ ಮತ್ತೆ ಪಡೆಯಲು ಬಯಸುವೆ.

ಮೊದಲ ಕುಡಿ ನೋಟಕೆ ನಾನಂದು ನಿನಗೆ ಸೋತೆ.
ಇಂದುಕೂಡ ಅಂದಿನಂತೆ ನಾ ಸೋಲಲು ಬಯಸುವೆ.

ನೀನಿತ್ತ ಮೊದಲ ಚುಂಬನ, ಮತ್ತೇರಿಸಿದಾ ಘಳಿಗೆ.
ಈಗ ಪುನಃ ಒದಗಿದರೆ ಅನುಭವಿಸಲು ಬಯಸುವೆ.

ಪಿಸುಮಾತಿಗೆ ನಸುನಾಚುತಿದ್ದೆ  ಕೆನ್ನೆಯ ಕೆಂಪಗಾಗಿಸಿ.
ಶೃಂಗಾರದ ಮೊದಲುಗಳ ಮತ್ತೆ ಕಾಣಲು ಬಯಸುವೆ.

ಗೋಧೂಳಿಗೆ ಬಾಗಿಲಲೆ ಕಾಯುತಿದ್ದೆ ನನಗಾಗಿ.
ದಣಿವಾರಿಸುವಾ ಆ ಸೊಬಗನು ಪುನಃ ನೋಡಲು ಬಯಸುವೆ.

ತ್ರಿನೇತ್ರಜನ ಬಾಳಿನಲ್ಲಿ ಹುಣ್ಣಿಮೆಯಂಥ ಕಾಲವದು.
ಮತ್ತೊಮ್ಮೆ ಮರಳಿಸೆಂದು ಮನಸಾರೆ ಬೇಡಲು ಬಯಸುವೆ.
..... ...... ..... ..... ..... ....
✍...ತ್ರಿನೇತ್ರಜ.
         
    ಶಿವಕುಮಾರ. ಹಿರೇಮಠ.

No comments:

Post a Comment