*ಗಜಲ್-೧೦*
ಭೋಜನಕೆ ನಿಜ ಸ್ವಾದವೆಲ್ಲಿದೆ ಉಪ್ಪಿಲ್ಲದ ಮೇಲೆ.
ಸಂಬಂಧಗಳಿಗೆ ಬೆಲೆ ಎಲ್ಲಿದೆ ಪ್ರೀತಿಯಿಲ್ಲದ ಮೇಲೆ.
ಕಾನನಕೆ ಹಸಿರಿದ್ದರೆ ಸೊಬಗು ಸವಿಯಲು ಚಂದ.
ಕಾಡು ಬೆಂಗಾಡಾಗದೆ ಆ ವರುಣ ಮುನಿದ ಮೇಲೆ.
ನಭದಿ ಪೂರ್ಣ ಚಂದ್ರ ನಗಲು ಅಲೆಗಳಿಗಾನಂದ.
ಕಡಲಿಗೆಲ್ಲಿಯ ಕಳೆಯು ಪೌರ್ಣಿಮೆ ಕಳೆದ ಮೇಲೆ.
ರಾಗಕೆ ಸ್ವರ, ಸ್ವರಕೆ ಪದ ಬೆರೆತರದೆ ಮಧುರ ಗಾನ.
ಬಾಳಗೀತೆಗೆ ಲಯವೆಲ್ಲಿದೆ ತಾಳವೆ ತಪ್ಪಿದ ಮೇಲೆ.
ಜೋಡಿರೆಕ್ಕೆ ಜೊತೆಗೂಡಿರೆ ಹಕ್ಕಿಗೆ ಹಾರುವ ಸಂಭ್ರಮ.
ತ್ರಿನೇತ್ರಜನಿಗೆ ಏನಿದ್ದರೇನಂತೆ ಒಲವು ಮುರಿದ ಮೇಲೆ.
-----------------
✍🏼 ತ್ರಿನೇತ್ರಜ್
ಶಿವಕುಮಾರ.ಹಿರೇಮಠ
No comments:
Post a Comment