Sunday, 18 February 2018

ಗಝಲ್ ೧೬
[17/02, 9:36 p.m.]

ಒಲವಿಗಿಂತ ನಿ‌ನಗೈಸಿರಿಯೆ ಇಷ್ಟವೆಂಬುದು ಗೊತ್ತಿರಲಿಲ್ಲ
ಹಣದಾಸೆಗೆ ನೀ ಎದೆ ಒಡೆಯುವೆಯೆಂದು ಗೊತ್ತಾಗಲಿಲ್ಲ

ಹೃದಯ ಗುಡಿಯಲಿ ನಿನ್ನಿರಿಸಿ ಪೂಜಿಸುತ್ತಿದ್ದೆ ಪ್ರೀತಿಯಿಂದ
ನೀನೊಂದು ಕ್ಷುದ್ರ ದೇವತೆ ಎಂಬುದ ನಾ ಅರಿತಿರಲಿಲ್ಲ

ನನ್ನ ಮನದ ಮನೆಯ ಅಂದ ಹೆಚ್ಚಿಸುವ ಪುಷ್ಪವೆಂದುಕೊಂಡೆ
ಮುಡಿಗೇರಿಸದೆ ಕಡೆಗಾಣಿಸುವ ಹೂವು ನೀನೆಂದು ಭಾವಿಸಲಿಲ್ಲ

ನಿನ್ನ ನಗೆಬಾಣದ ನೋಟಕ್ಕೆ ನಾನದೆಷ್ಟು ಹಾತೊರೆಯುತ್ತಿದ್ದೆನಲ್ಲ
ತುದಿಯಲ್ಲಿ ಕಾರ್ಕೂಟಕ ವಿಷವಂಟಿರುವುದು ತಿಳಿಯಲೇ ಇಲ್ಲ

ಹೃದಯವಂತರಿಗೇ ಮೋಸವಾಗಲು ಯಾರಿಟ್ಟಿಹ ಶಾಪವೋ ಎನೋ?
ಎದೆ ಉರಿವ ಅಗ್ಗಿಷ್ಟಿಕೆಯಾಗಿ ಹೃದಯವು ಕಪ್ಪಿಟ್ಟ ಇದ್ದಿಲಂತಾಯ್ತಲ್ಲ

ಜಗವನ್ನೆ ಎದುರಿಸುವ ಹುಮ್ಮಸ್ಸಿನ ಹರೆಯದೆದೆಗಾರಿಕೆ ನನ್ನಲ್ಲಿತ್ತು
ಪ್ರೀತಿ ಕೊಲ್ಲುವ ಪ್ರೇತದ ಸಂಗಮಾಡಿ ನಲುಗುವೆನೆಂದೆಣಿಸಿರಲಿಲ್ಲ

ಜೀವಕೊಟ್ಟವರ ಮರೆತು ಗಮನ ನಿನ್ನಲಿರಿಸಿ ಗಮ್ಯವನೇ ಮರೆತೆ
ಗೋರಿ ಸೇರಿದರೂ ನೀನಿತ್ತ ನೋವ ತ್ರಿನೇತ್ರಜ ಮರೆಯುವಂತಿಲ್ಲ

✍🏼 ತ್ರಿನೇತ್ರಜ

 ಶಿವಕುಮಾರ. ಹಿರೇಮಠ.

No comments:

Post a Comment