Wednesday, 14 February 2018

 *ಗಜಲ್-13*
[12/02, 5:59 p.m.]

ನಿನ್ನ ಕಂಡಾಗ ಮೌನವಾಗಿಬಿಟ್ಟೆ ಭಯವು ಬಹಳವಿತ್ತು
ನಮ್ಮಿಬ್ಬರ ಮಧ್ಯೆ ಮಾತೇ ನಿಂತಾಗ ನೋವು ಬಹಳವಿತ್ತು

ನಿನಗೆಂದು ನೂರೊಂದು ಕನಸುಗಳ ಮಾಲೆ ಮಾಡಿದ್ದೆ
ಹಾರ ಹರಿದಾಗಲೂ ನಿನ್ನಲ್ಲಿ ನನಗೆ ಒಲವು ಬಹಳವಿತ್ತು

ಬೀಸೋ ಗಾಳಿಯಲಿ ತೇಲಿ ಬಂದ ತಂಪು ಬೇಸರ ತಂತು
ನೀನಿತ್ತ ಭಾವಗಳು ಸಾಲಲಿಲ್ಲ ಕಣೆ ಹಸಿವು ಬಹಳವಿತ್ತು

ನೀನಿಲ್ಲದೆ ಬದುಕಲಾರನೆಂದು ಮನ ಬಹಳ ಬಿಕ್ಕುತಿತ್ತು
ಬದುಕಿದೆ ಸಾಯಲಿಲ್ಲವೇ ಬಾಳುವ ಛಲವು ಬಹಳವಿತ್ತು

ತ್ರಿನೇತ್ರಜನ ಹೃದಯ ಸಿಂಹಾಸನವು ಸದಾ ಬರಿದಾಗುಳಿಯಿತು
ನೀ ಬಂದು ಅಲಂಕರಿಸಬಹುದಿತ್ತು ಅಲ್ಲಿ ಜಾಗವು ಬಹಳವಿತ್ತು

✍🏼 ತ್ರಿನೇತ್ರಜ

 ಶಿವಕುಮಾರ. ಹಿರೇಮಠ.

No comments:

Post a Comment