Friday, 9 February 2018


        ಗಝಲ್-- ೧
ಅಂದು ಪ್ರೀತಿ ಮಳೆಸುರಿಸಿ ಮನದಿ ಹಸಿರನು ತುಂಬಿದೆ.
ಇಂದು ವಿರಹ ವ್ಯಥೆಯಿಂದ ಕಣ್ಣಲಿ ನೀರನು ತುಂಬಿದೆ.

ನಿನ್ನ ಕಣ್ಣಲೇ ನನ್ನ ನಾ ನೊಡಿ ಆಗ ನಲಿದಾಡುತ್ತಿದ್ದೆ
ನೀ ಹೋದಮೇಲೆ ಕಣ್ಣಿದ್ದರೂ ಬಾಳಲಿ ಕತ್ತಲೆಯನು ತುಂಬಿದೆ

ನನ್ನೆದೆಯ ಹೊಲದಲಿ ಪ್ರೇಮದ ಬೀಜಗಳ
ಬಿತ್ತುತ್ತಿದ್ದೆ.
ನೀ ದೂರವಾಗಲು ನನ್ನೆದೆಯ ತುಂಬೆಲ್ಲಾ
ಬರಡನು ತುಂಬಿದೆ

ಕಾಲ್ಗೆಜ್ಜೆ, ಬಳೆ ನಾದಗಳಲಿ ನನ್ನ ನೀ ಕುಣಿಸುತ್ತಿದ್ದವಳು.
ಈಗ ಸದ್ದಿಲ್ಲ, ಸಡಗರವಿಲ್ಲ ಮನದಿ ನೀರಸ ಮೌನವನು ತುಂಬಿದೆ

ಸೌಂದರ್ಯದ ಅಮಲೇರಿಸಿ ನಶೆಯ ತುಂಬುತ್ತಿದ್ದವಳು.
ತ್ರಿನೇತ್ರಜನ ಬದುಕಲೀಗ ನಿನ್ನ ಸ್ಥಾನಕೆ ಸಾರಾಯಿನು ತುಂಬಿದೆ
... ..... ..... .....
✍...ತ್ರಿನೇತ್ರಜ

ಶಿವಕುಮಾರ.ಹಿರೇಮಠ.

No comments:

Post a Comment