*ಗಜಲ್-೭*
ಎರಡು ಗಿಳಿಗಳ ಮುದ್ದಾಟಕಂಡು ನಾ ಕಳೆದುಹೋದೆ ಗೆಳತಿ.
ಮನಪರದೆಯ ಮೇಲಿಂದು ಅರೆಕ್ಷಣ ನೀ ಸುಳಿದುಹೋದೆ ಗೆಳತಿ.
ಅಂದು ಹರೆಯದ ಹೃದಯಂಗಳದಲ್ಲಿ ನಿನಗಿಷ್ಟ ಬಂದಂತೆ
ಬಣ್ಣ ಬಣ್ಣದ ರಂಗೋಲಿಯ ಚಿತ್ತಾರ ಬಿಡಿಸಿಹೋದೆ ಗೆಳತಿ.
ಹೊತ್ತು ಮುಳುಗುವರೆಗೂ ಜತನದಿಂದ ಇರಿಸಬೇಕೆಂದಿದ್ದೆ,
ಮಧ್ಯಾಹ್ನವೇ ಚಂಚಲತೆಯ ನೀರನ್ನು ಸುರಿದುಹೋದೆ ಗೆಳತಿ.
ನೆನಪಿನ ಬುತ್ತಿಯ ಬಿಚ್ಚಿ ನಿನಗಾಗಿ ನಾ ಕಾಯುತ್ತಲೇ ಇದ್ದೆ,
ಮರಳಿ ಮತ್ತೆ ನನ್ನೊಡನೆ ಊಟವನ್ನು ಮಾಡದೆಹೋದೆ ಗೆಳತಿ.
ವಸಂತಗಳುರುಳಿ,ಕೋಗಿಲೆಗಳೆಷ್ಟೋ ಹಾಡಿಹೋದರೂ,
ತ್ರಿನೇತ್ರಜನೆದೆಯಲ್ಲಿ ಅಪಸ್ವರವಾಗಿ ಉಳಿದುಹೋದೆ ಗೆಳತಿ.
.... ... ... ... ... .... .... ...
..✍🏼 ತ್ರಿನೇತ್ರಜ.
ಶಿವಕುಮಾರ. ಹಿರೇಮಠ.
No comments:
Post a Comment