ಗಝಲ್-೨೪
ಭೂರಿ ಸಭೆಯೊಳು ಕರ್ಣ ಭಂಗಂಬಡುತಿರಲು ಮಾತೃ ಮಮತೆಗೆ ಏನಾಗಿತ್ತು
ಮೈಗಂಟಿದ್ದ ಕವಚವ ಕಿತ್ತು ದಾನವಾಗಿ ಪಡೆದಾಗ ಶ್ರೇಷ್ಠ ಪೊಗರಿಗೆ ಏನಾಗಿತ್ತು
ಮೈಗಂಟಿದ್ದ ಕವಚವ ಕಿತ್ತು ದಾನವಾಗಿ ಪಡೆದಾಗ ಶ್ರೇಷ್ಠ ಪೊಗರಿಗೆ ಏನಾಗಿತ್ತು
ಅಂಧತ್ವವ ಮುಂದುಮಾಡಿ ಜೇಷ್ಠನನು ಸಿಂಹಾಸನಕ್ಕೆ ಕಡೆಗಣಿಸಿದರು
ಪಾಂಡು ಮೃತ್ಯಾನಂತರ ರಾಜ್ಯವ ಮನ್ನಡೆಸಿದಾಗ ಆಳ್ವಿಕೆಗೆ ಏನಾಗಿತ್ತು
ಪಾಂಡು ಮೃತ್ಯಾನಂತರ ರಾಜ್ಯವ ಮನ್ನಡೆಸಿದಾಗ ಆಳ್ವಿಕೆಗೆ ಏನಾಗಿತ್ತು
ಹೆತ್ತ ಕಂದನಿವನೆಂದು ಗೊತ್ತಾದಾಗಲೂ ತುಟಿ ಬಿಚ್ಚಲು ಮನಸಾಗಲಿಲ್ಲ
ದತ್ತು ಪಡೆದಾದರೂ ತಪ್ತಮನಕೆ ತೃಪ್ತಿ ನೀಡದ ಹೆತ್ತ ಕರುಳಿಗೆ ಏನಾಗಿತ್ತು
ದತ್ತು ಪಡೆದಾದರೂ ತಪ್ತಮನಕೆ ತೃಪ್ತಿ ನೀಡದ ಹೆತ್ತ ಕರುಳಿಗೆ ಏನಾಗಿತ್ತು
ರಣಕಂಕಣಕಟ್ಟಿ ಶಸ್ತ್ರ ಢಾಳಿಸುವಾಗ ಹುಟ್ಟ ಗುಟ್ಟನುಸುರಿದ್ದು ಸಂಚು
ಪಟ್ಟದಾಸೆ ತೋರಿ ಮಿತ್ರನ ತೊರೆಯೆಂದಾಗ ವಿವೇಚನೆಗೆ ಏನಾಗಿತ್ತು
ಪಟ್ಟದಾಸೆ ತೋರಿ ಮಿತ್ರನ ತೊರೆಯೆಂದಾಗ ವಿವೇಚನೆಗೆ ಏನಾಗಿತ್ತು
ಜಲ ತೊರೆದ ಬಂಗಡೆಯಂತಾಗಿಸಿ ರಾಧೇಯನ ಡೇರೆಯೊಳಿಕ್ಕಿದ ಗಂಗಾಪುತ್ರ
ಯುದ್ಧವ ಗೆಲ್ಲಲಾಗದ ಎಲ್ಲ ಬಲ್ಲ ಮುತ್ತಾತನ ಕ್ಷಾತ್ರ ತೇಜಸ್ಸಿಗೆ ಏನಾಗಿತ್ತು
ಯುದ್ಧವ ಗೆಲ್ಲಲಾಗದ ಎಲ್ಲ ಬಲ್ಲ ಮುತ್ತಾತನ ಕ್ಷಾತ್ರ ತೇಜಸ್ಸಿಗೆ ಏನಾಗಿತ್ತು
ಅನುಜೆಯ ಸೌಭಾಗ್ಯಕ್ಕೆ ತೊಟ್ಟ ಬಾಣ ಮರಳಿ ತೊಡದ ವಚನ ಪಡೆದಾಯ್ತು
ಹೂತ ಚಕ್ರವನೆತ್ತುತ್ತಿದ್ದ ನಿಶಸ್ತ್ರನ ಕತ್ತಿಗೆ ಶರವಿಕ್ಕಿದಾಗ ನೀತಿಗೆ ಏನಾಗಿತ್ತು
ಹೂತ ಚಕ್ರವನೆತ್ತುತ್ತಿದ್ದ ನಿಶಸ್ತ್ರನ ಕತ್ತಿಗೆ ಶರವಿಕ್ಕಿದಾಗ ನೀತಿಗೆ ಏನಾಗಿತ್ತು
ಧರ್ಮದ ಪಥದಲೆ ನಡೆದು ಧರ್ಮ ರಕ್ಷಣೆಯಗೈಯಲಾಗದಲ್ಲಾ ತ್ರಿನೇತ್ರಜ
ನ್ಯಾಯೋಚಿತ ಹಕ್ಕಿಗೆ ಹೋರಾಡಿ ಮಡಿದ ಸುಯೋಧನನ ಅರ್ಹತೆಗೆ ಏನಾಗಿತ್ತು
.... ..... ..... .... ..... .... ...
✍ ತ್ರಿನೇತ್ರಜ್
ನ್ಯಾಯೋಚಿತ ಹಕ್ಕಿಗೆ ಹೋರಾಡಿ ಮಡಿದ ಸುಯೋಧನನ ಅರ್ಹತೆಗೆ ಏನಾಗಿತ್ತು
.... ..... ..... .... ..... .... ...
✍ ತ್ರಿನೇತ್ರಜ್
ಶಿವಕುಮಾರ ಹಿರೇಮಠ
No comments:
Post a Comment